ಶನಿವಾರ, ಆಗಸ್ಟ್ 15, 2020

ಇಂದು ಮುಂಜಾನೆಯ ಮಾತು.


Add caption



ದುಗುಡ ತುಂಬಿದಂಥ ಮುಂಜಾವು. ಓತ ಪ್ರೋತ ಸುರಿಯುತ್ತಿದೆ ಮಳೆ. ಏಳಾದರೂ ಸೂರ್ಯನ

ಸುಳಿವೇ ಇಲ್ಲ. ಈಚೆಗೆ ಅವನು ಹೀಗೆಯೇ. ಮನಬಂದರೆ, ದಿನದಲ್ಲೊಮ್ಮೆ ಯಾವಾಗಲೋ ಮನಬಂದಾಗ

ನಮ್ಮ ಮುಂದೆ ಸುಳಿದಾಡಿ, ಬದುಕನ್ನಿಷ್ಟು ಬೆಳಕುಮಾಡಿ, ಮತ್ತೆ ಮರೆಯಾಗಿಬಿಡುತ್ತಾನೆ.  

ನಮ್ಮ ಮನೆಯ ಬೆಳೆದ ಮಕ್ಕಳಂತೆ ! 

ಮೋಡಗಳೂ ಮುಗಿಲ ಪೂರ್ತಿ ಹರಡಿಕೊಂಡು ಮಲಗಿಬಿಟ್ಟಿವೆ. ಎರಡುತಿಂಗಳಿಂದ ನಡೆದು ನಡೆದು

ಸುಸ್ತಾಯಿತೇನೋ ! ತಾವು ತುಂಬಿಕೊಂಡ ನೀರೆಲ್ಲಾ ಒಂದೇಕಡೆ ಸುರಿದುಹೋಗುತ್ತಿದೆಯೆಂಬ ಪರಿವೆಯೂ

ಇಲ್ಲ ಅವಕ್ಕೆ ! 

ಎದ್ದು ಹೊರಬಿದ್ದವನು ನಾನೊಬ್ಬನೇ ಎನಿಸುತ್ತದೆ. ನನ್ನ ನಿತ್ಯಸಂಚಾರದ ಚಟದ ದಾಸ. 

ನನ್ನ ಜತೆಗೆ, ಅಲ್ಲಿ ದೂರದ ಮರವೊಂದರಮೇಲೆ, ಪೂರ್ತಿ ತೋಯ್ದು ತೊಪ್ಪೆಯಾಗಿ, ಕಪ್ಪುಕಲೆಯಾಗಿ

ಕುಳಿತಿರುವ ಕಾಗೆಯೊಂದೇ ! ಅದರದೇನು ಸಂಕಟವೋ ದೇವರೇಬಲ್ಲ. 

ಹಾಗೆ ನೋಡಿದರೆ, ಕಪ್ಪು ಛತ್ರಿಕವುಚಿಕೊಂಡು ನಡೆಯುತ್ತಿರುವ ನಾನೂ ರಸ್ತೆಯಮೇಲೆ ಒಂದು ಕಪ್ಪು ಕಲೆಯೇ.  

ನನ್ನನ್ನು ಕಂಡವರು, ‘ಈ ಮಳೆಯಲ್ಲಿ ಹೊರಬಿದ್ದ ಈ ಮನುಷ್ಯನದು ಅದೇನು ಸಂಕಟವೋ,


ಹುಚ್ಚೋ’ ಎನ್ನುವರೇನೋ !   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ