ಶುಕ್ರವಾರ, ಆಗಸ್ಟ್ 14, 2020

ದೈತ್ಯರನ್ನು ಕಂಡಾಗ ಅನಿಸಿದ್ದು







 


ಮಳೆಗಾಲ ಬರುತ್ತಿದ್ದಂತೆ 

ಇವರು ಅವತರಿಸುತ್ತಾರೆ 

ಕಂಬವನ್ನೋ ಕಾಂಡವನ್ನೋ

ಆವರಿಸಿ ಬೆಳೆಯುತ್ತಾರೆ 

ಭೂತಾಕಾರ ತಳೆದು 

ಕೈಚಾಚಿ ನಿಲ್ಲುತ್ತಾರೆ 

ಕೆಲವು ತಿಂಗಳಕಾಲ 

ಕಂಗೊಳಿಸುತ್ತಾರೆ

ಕಾಲಮುಗಿದಂತೆ  

ನಿಂತಲ್ಲಿಯೇ ನಲುಗಿ 

ಕಂಡಂತೆಯೇ ಕರಗಿ 

ಕಾಣದಾಗುತ್ತಾರೆ 


ಪ್ರತಿ ವರುಷದ ನೆಂಟರು

ಈ ಹಚ್ಚ ಹಸಿರು ದೈತ್ಯರು !  


ಮಳೆಗಾಲ ಕಾಲಿಡುತ್ತಿದ್ದಂತೆಯೇ ನನ್ನ ಸುತ್ತಮುತ್ತಲಿನ ಗಿಡ, ಬಳ್ಳಿಗಳಿಗೆ ಹೊಸ ಚೈತನ್ಯ ಬಂದು

ಹುರುಪಿನಿಂದ ಬೆಳೆಯುತ್ತವೆ. ಅಕ್ಕ ಪಕ್ಕದಲ್ಲಿ ಸಿಕ್ಕ ಖಾಲಿಜಾಗವನ್ನೆಲ್ಲಾ ಆವರಿಸಿಕೊಳ್ಳುತ್ತವೆ.

ತಂತಿ, ಕಂಬ, ಮರಗಳನ್ನು ಆಧರಿಸಿದ  ಬಳ್ಳಿಗಳು ಆಕಾಶದತ್ತ ಪಸರಿಸುತ್ತವೆ. ದೊಡ್ಡ ದೊಡ್ಡ ಹಸಿರಿನ

ರಾಶಿಗಳಾಗುತ್ತವೆ. ಹಸಿರು ದೈತ್ಯರಾಗಿ ಅವತರಿಸುತ್ತವೆ. 


Add caption



Add caption


ಈ ಹಸಿರು ದೈತ್ಯರನ್ನು ನಾನು ಪ್ರತಿ ವರುಷ ನೋಡುತ್ತೇನೆ. ಅವರನ್ನು ನೋಡಿದಾಗಲೆಲ್ಲಾ ನನಗೆ ನಾವು

ದಸರಾ, ದೀಪಾವಳಿಯ ಸಮಯದಲ್ಲಿ ಕಟ್ಟಿ ನಿಲ್ಲಿಸುವ  ರಾವಣಾಸುರ, ನರಕಾಸುರರ ನೆನಪಾಗುತ್ತದೆ. 

ದುಷ್ಟತೆಯ ಪ್ರತೀಕವಾದ ಅಸುರರನ್ನು ಸುಡುವ ಮೂಲಕ ದುಷ್ಟತನವನ್ನು ನಾಶಮಾಡುತ್ತೇವೆಂಬ

ಭಾವನೆಯಿಂದ ನಾವು ಅವರ ಪ್ರತಿಕೃತಿಗಳನ್ನು ಸುಟ್ಟು ಭಸ್ಮಮಾಡುತ್ತೇವೆ.  

ಎಷ್ಟು ಪ್ರತಿಕೃತಿಗಳನ್ನು ಸುಟ್ಟರೂ ನಮ್ಮ ಮನದೊಳಗೆ  ಮನೆಮಾಡಿರುವ ಅಸುರರು ನಿರಂತರವಾಗಿ

ಬೆಳೆಯುತ್ತಲೇ ಇದ್ದಾರೆ. 

ನಮ್ಮ ಒಳಿತಿಗಾಗಿ ತಾವು ಬೆಳೆಯುವ ಹಸಿರುದೈತ್ಯರ ವಂಶ ಮಾತ್ರ ದಿನೇ ದಿನೇ ನಿರ್ವಂಶವಾಗುವತ್ತ ಸಾಗುತ್ತಿದೆ !

(ರಾವಣಾಸುರ, ನರಕಾಸುರರ ಚಿತ್ರಗಳು ನನ್ನವಲ್ಲ. ಅಂತರ್ಜಾಲದಿಂದ ಪಡೆದುಕೊಂಡದ್ದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ