ಶುಕ್ರವಾರ, ಏಪ್ರಿಲ್ 24, 2020

Grihapraveshada Udugore - Nissar Ahmad

ವರ್ಷಗಳ ಹಿಂದೆ ನಮ್ಮ ಗೃಹಪ್ರವೇಶದ ದಿವಸ
ಕನಿಷ್ಟರು ವರಿಷ್ಟರು ಎಂಬ ಫರಕಿಲ್ಲದೆ ನಂಟರಿಷ್ಟರು
ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು
ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು
ಕರೆಯೋಲೆಯಲ್ಲಿ ಬೇಡವೆನ್ದಿದ್ದರೂ
ಕಣ್ಣುಕುಕ್ಕುವ ರಂಗುರಂಗಿನ ಪ್ಯಾಕೆಟ್ಟುಗಳಸಲ್ವಾರ್ ಕಮೀಜ್ ತೊಟ್ಟು
ಸೂಚಿಸದೆ ಲವಲೇಶವೂ ಗುಟ್ಟು
ಮರೆಮಾಚಿದ ಮಿಠಾಯಿ, ಪುಷ್ಪಗುಚ್ಛ, ಕಪ್ಪು ಸಾಸರ್ ಸೆಟ್ಟು
ಗಡಿಯಾರ ಬಟ್ಟೆಬರೆ
ತಂದಿತ್ತರು ಇನ್ನು ಏನೇನೋ ಪ್ರೀತಿಯುಡುಗೊರೆ

ಮಾರನೆಯ ದಿನ ಮಿಠಾಯಿಯ ಆಯುಷ್ಯ
ಮುಗಿದಿತ್ತು ಬಾಯಿಗಳ ಬೇಟೆಗೆ
ಅದರ ಮರುದಿನ ಬಸವಳಿದ ಹೂವಿನ ಬುಕೆ
ಕಾಲಕ್ರಮೇಣ ಒಡೆದ ಕಪ್ಪು ಬಸಿಗಳ ಚಕ್ಕೆ
ಪಾವ್ತಿಯಾದವು ಬೀದಿ ತೊಟ್ಟಿಯ ಹರಿಶ್ಚಂದ್ರ ಘಾಟಿಗೆ

ಗಡಿಯಾರ ಗತಿಗೆಟ್ಟು ಉಪೇಕ್ಷೆಗೊಳಗಾಗಿ
ವಸ್ತ್ರ ಹರಿದು ನಿರುಪಯೋಗಿ
ವರ್ಗವಾದವು ಹಿನ್ಮನೆಯ ಹೆಳವ ಕಪಾಟಿಗೆ
ಇದೆತರಹ
ಇನ್ನಿತರ ಕಾಣಿಕೆಗಳ ಕಥೆ ಸಹ.

ಅಷ್ಟೇನೂ ಗುರುತಿಲ್ಲದ ನನ್ನ ಕವನಾಭಿಮಾನಿಯೋರ್ವ
ಬೆಲೆಕೊಟ್ಟು ಕೊಳ್ಳದ, ಎಂದೇ ಬೆಲೆಕಟ್ಟಲಾಗದ ಅಪೂರ್ವ
ಉಡುಗೊರೆಯೊಂದ ಅಂಜುತ್ತಲೇ ಕೊಟ್ಟ
ಕಾಗದದ ವರ್ನರನ್ಜಿತತೆಯಿಂದ ಅದಗಿಸಿಡದೆ ಒಳ ಗುಟ್ಟ
ಅರ್ಥಾತ್ ನಿತ್ಯಮಲ್ಲಿಗೆ ಹಮ್ಬಿನೊಂದು ಕಡ್ಡಿಯ ತಂದು ಗೇಟ ಬಳಿ ನೆಟ್ಟ.

ಇಂದಿಗೂ ಒಳಹೊರಗೆ ಹಿತಮಿತ ಗಮಗಮ
ವಿದೇಶಿ ಅತ್ತರಿಗೆ ಸಮ
ನೋಟಕ್ಕೆ ಹಬ್ಬದ ಊಟ ಚಿಕ್ಕೆ ಹೂ ಹೊರೆ
ಅವನೀಗ ಆಗಿದ್ದರು ಕಣ್ಮರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ