ಶನಿವಾರ, ಜುಲೈ 22, 2023

ಡಿ ವಿ ಜಿ - ದೇವರು - ನನ್ನ ಪದ್ಯ

 

ತಮ್ಮ ‘ಮಂಕುತಿಮ್ಮನ ಕಗ್ಗ’ ದ ಮೊದಲಮಾತಿನಲ್ಲಿ ಶ್ರೀ ಡಿವಿಜಿಯವರು, ಆಸಕ್ತರು

ತಮ್ಮ ಪುಸ್ತಕವನ್ನು ಓದಬೇಕಾದ ರೀತಿಯನ್ನು ತಿಳಿಸಿದ್ದಾರೆ. ಮನಬಂದಾಗ

ಒಂದೊಂದು ಪದ್ಯವನ್ನು ಆರಿಸಿಕೊಂಡು ನಿಧಾನವಾಗಿ ಪೆಪ್ಪರಮಿಂಟಿನಂತೆ

ಚಪ್ಪರಿಸಬೇಕೆಂದು ಅವರ ಸಲಹೆ. ನನ್ನ ಮಟ್ಟಿಗೆ ಅವರ ‘ಜೀವನಧರ್ಮಯೋಗ’ವೂ

ಹಾಗೆಯೇ. ಅದನ್ನು ಒಮ್ಮೆಗೇ ಹಿಡಿದು ಕೂತು ಓದಿ ಮುಗಿಸಬೇಕಿಲ್ಲ. ಮನಬಂದಾಗ,

ಯಾವುದೋ ಒಂದು ಪುಟವನ್ನು ತೆರೆದು ಓದುತ್ತಿದ್ದರೆ ಸಾಕು. ಅದರಲ್ಲಿ ಮನತಟ್ಟುವಂಥ,

ಮೆಲುಕುಹಾಕುವಂಥ ಏನಾದರೂ ವಿಷಯವಿದ್ದೇ ಇರುತ್ತದೆ. ಆದುದರಿಂದ ನಾನು

ಅದನ್ನು ಆಗಾಗ ಅವಲೋಕಿಸುತ್ತಿರುತ್ತೇನೆ. ಮೊನ್ನೆ ತೆಗೆದ ಒಂದು ಪುಟದಲ್ಲಿ

ಡಿ ವಿ ಜಿ ಯವರು ತಮ್ಮನ್ನು ಭೇಟಿಯಾಗಲು ಬಂದಿದ್ದ ಜಪಾನೀ ಯುವಕನೊಬ್ಬನೊಡನೆ

ನಡೆಸಿದ ಸಂಭಾಷಣೆಯ ಬಗ್ಗೆ ಬರೆದಿದ್ದು ಕಂಡಿತು. 


ಸಂಸ್ಕೃತಿ, ತತ್ವ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಆತ ಭಾರತೀಯ

ತತ್ವ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಡಿ ವಿ ಜಿ ಯವರನ್ನು ಭೇಟಿಯಾಗಿದ್ದನಂತೆ.

ಎರಡು ಮೂರುಘಂಟೆಗಳಕಾಲ ಸಂವಾದ ನಡೆಸಿ ಆತ ಹೊರಡಲು ಅನುವಾದಾಗ

ಡಿ ವಿ ಜಿ ಯವರು ಆತನಿಗೆ ‘ದೇವರು ನಿನಗೆ ಒಳ್ಳೆಯದು ಮಾಡಲಿ’ ಎಂದು

ಹರಸಿದರಂತೆ. ಆತ ‘ಹಾಗಾದರೆ ನಿಮಗೆ ದೇವರಲ್ಲಿ ನಂಬಿಕೆಯಿದೆಯೇ’ ಎಂದು

ಕೇಳಿದನಂತೆ. ಆ ಪ್ರಶ್ನೆಗೆ ಡಿ ವಿ ಜಿ ಯವರು ಉತ್ತರಿಸಿದ್ದು ಹೀಗಿದೆ. 


“ನಾನು ಈಗ ಎರಡು ಶಬ್ದಗಳ ಬಳಕೆ ಮಾಡಿದೆ. ಒಂದು ‘ದೇವರು’,

ಮತ್ತೊಂದು ‘ಒಳ್ಳೆಯದು’. ನಾವು ಏನೆಲ್ಲವನ್ನು ‘ಒಳ್ಳೆಯದು’ ಎಂದು ತಿಳಿಯುತ್ತೇವೋ

ಅದರ ಹಿಂದೆ ನಿಂತು, ಅದನ್ನು ‘ಒಳ್ಳೆಯ’ದಾಗಿಸಿದ ಶಕ್ತಿಯನ್ನು ನಾನು ದೇವರೆಂದು

ಭಾವಿಸುತ್ತೇನೆ. ನಾನು ನಿಮಗೆ ಒಂದು ಲೋಟ ಕಾಫಿಯನ್ನು ಕೊಟ್ಟೆ. ನೀವು ಅದನ್ನು

ಕುಡಿದು ಕಾಫಿ ಚೆನ್ನಾಗಿದೆ ಎಂದಿರಿ. ನಾ ಕೊಟ್ಟ ಕಾಫಿಯನ್ನು ‘ಚೆನ್ನಾಗಿ’ಸಿದ

ಶಕ್ತಿಯನ್ನು ನಾನು ದೇವರೆನ್ನುತ್ತೇನೆ.”  


‘ದೇವರು’ ಎಂಬ ಪರಿಕಲ್ಪನೆಯ ವಿವರಣೆ ಸುಲಭಸಾಧ್ಯವಲ್ಲ. ನಾವು ಕೆಲವರು

ಒಂದಲ್ಲಾ ಒಂದು ಕಾರಣದಿಂದ, ನಮ್ಮ ಸ್ವಂತ ಅರಿವಿಂದಲೋ - ಇಲ್ಲದೆಯೋ,

ದೇವರಿದ್ದಾನೆ ಎಂಬ ನಂಬಿಕೆಯನ್ನೋ, ಅಥವಾ ಇಲ್ಲವೆಂಬ ಮನಸ್ಥಿತಿಯನ್ನೋ

ಪಡೆದುಕೊಂಡು ಅದಕ್ಕೆ ತಕ್ಕಂತೆ ನಮ್ಮ ಬಾಳನ್ನು ರೂಪಿಸಿಕೊಂಡಿರುತ್ತೇವೆ. ಹೀಗೆ

ಯಾವುದೇ ಕಾರಣದಿಂದ ಧೃಡವಾಗಿ ಒಂದು ಮನಸ್ಥಿತಿಯನ್ನು ಗಳಿಸಿಕೊಂಡಿರುವವರು

ಅದೃಷ್ಟವಂತರೆಂದು ನನ್ನ ನಂಬಿಕೆ. ಡಿ ವಿ ಜಿ ಯವರ ಮಾತಿನಲ್ಲೇ ಹೇಳುವುದಾದರೆ 

“ನಂಬಿದನು ಪ್ರಹ್ಲಾದ ನಂಬದಿರ್ದನು ತಂದೆ - ಕಂಬದಿನೋ, ಬಿಂಬದಿನೋ

ಮೋಕ್ಷ ಅವರವರಿಂಗಾಯ್ತು”. 


ಅವೆರಡೂ ಇಲ್ಲದೆ “ನಂಬಿಯೂ ನಂಬದ ಇಬ್ಬಂದಿಯಾಗಿ ಸಿಂಬಳದ ನೊಣದಂತೆ”

ಒದ್ದಾಡುವವರು ನನ್ನಂಥವರು. ನಾವು ದೇವರ ಅಸ್ತಿತ್ವದ ಬಗ್ಗೆ ಒಂದು ನಿಲುವನ್ನು

ತಾಳಬೇಕಾದರೆ, ಅನೇಕ ಚಿಂತಕರ ಮೂಲಕ ನಮಗೆ ಲಭ್ಯವಿರುವ ವಿವರಣೆಗಳನ್ನು

ತಿಳಿದುಕೊಂಡು ಅದನ್ನು ಮನದಲ್ಲಿ ಮತ್ತೆ ಮತ್ತೆ ಮಂಥನ ಮಾಡಿ ನಮ್ಮದೇ ಒಂದು

ತೀರ್ಮಾನಕ್ಕೆ ಬರಬೇಕಾಗುತ್ತದೆ. ಅದು ಎಲ್ಲರಿಗೂ ಸಾಧ್ಯವಿಲ್ಲ, ಸಮಯವಿಲ್ಲ

ಅಥವಾ ಅದಕ್ಕೆ ಬೇಕಾದ ಮನಸ್ಥಿತಿಯಿಲ್ಲ. ಜತೆಗೆ ಆ ರೀತಿಯ ಚಿಂತನೆಯ

ಅವಶ್ಯಕತೆಯಿದೆಯೇ ಎಂಬುದಕ್ಕೂ ಖಚಿತವಾದ ಉತ್ತರವಿಲ್ಲ ! ಡಿವಿಜಿಯವರಂಥ

ಕೆಲವರು ಅದರ ಬಗ್ಗೆ ಚಿಂತನೆಮಾಡಿ ತಮ್ಮ ನಿಲುವನ್ನು ಸರಳವಾಗಿ ಬರೆದಿರಿಸುವ

ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೂ ಕೊನೆಗೆ ದಕ್ಕಿದ್ದು “ಕಾವನೊರ್ವನಿರಲ್ಕೆ

ಜಗದ ಕಥೆಯೇಕಿಂತು?” ಎಂಬ ಪ್ರಶ್ನೆಯೇ !


ಹಾಗಾಗಿ, ಆ ತೊಂಚಾವಂಚಕ್ಕೆ ಬೀಳದೆ, ಒಂದು ಮೂರ್ತಿಯನ್ನು ದೇವರೆಂದು

ಭಾವಿಸಿ ಅದಕ್ಕೆ ಕೈಮುಗಿದು ಪೂಜೆ ಸಲ್ಲಿಸುವುದು ಸುಲಭವಾದ ಕೆಲಸ.

ಅದರಿಂದಲೇ ನಮ್ಮ ಸುತ್ತ ಮುತ್ತ ಇಷ್ಟೊಂದು ದೇವಸ್ಥಾನಗಳು, ಪೂಜೆಗಳು,

ಹಬ್ಬ ಹರಿದಿನಗಳು. 


ಗಹನವಾದ ಈ ವಿಷಯ ಒಂದು ಬದಿಗಿರಲಿ. ನಾನೇನೋ ಹೇಳಲು ಹೊರಟು

ಈ ಚಕ್ರವ್ಯೂಹದಲ್ಲಿ ಕಾಲಿಟ್ಟುಬಿಟ್ಟೆ ! ನಾನು ಈ ಬರಹವನ್ನು ಪ್ರಾರಂಭಿಸಿದ

ಉದ್ದೇಶ್ಯ ಏನೆಂದರೆ, ಈ ಕೆಳಗೆ ಕಾಣಿಸಿರುವ ನನ್ನ ಪದ್ಯ, ನಾನು ಮೇಲೆ ತಿಳಿಸಿರುವ,

ಡಿವಿಜಿ ಮತ್ತು ಜಪಾನೀ ಯುವಕನ ಮಧ್ಯೆ ನಡೆದ ಸಂಭಾಷಣೆಯಿಂದ

ಪ್ರಚೋದಿತವಾದದ್ದು ಎಂಬ ವಿಷಯವನ್ನು ತಿಳಿಸುವುದಷ್ಟೇ ! 



ಎಲ್ಲಿ ಕಾಣಲೊ ಹರಿಯೇ 

ನನ್ನ ಅರಿವಿಗೆ ಬಾರದ 

ನಿನ್ನ ಇರವನು 


ಬೆಳಗಿನಲಿ ಹೊಳೆಹೊಳೆವ    

ಎಳೆಬಿಸಲ ಕಿರಣದಲಿ 


ಪರಿಪರಿಯ ಪುಷ್ಪಗಳ    

ಪರಿಮಳದ ಘಮಲಿನಲಿ 


ಹಕ್ಕಿ ಇಂಚರದ 

ಇಂಪಾದ ಗಾನದಲಿ 


ಮುಂಜಾನೆ ಮುದವೀವ  

ತಂಗಾಳಿ ತಂಪಿನಲಿ  


ಕಂಗಳನು ತಂಗೊಳಿಪ

ನಳನಳಿಪ ಹಸುರಿನಲಿ 


ಜೀವದಲಿ ಜಡಗಳಲಿ

ತೃಣರೇಣು ಕಣಗಳಲಿ 


ಕಂಡಲ್ಲಿ, ಕಾಣದಲಿ

ಕಾಣ್ವ ಮನವಿದ್ದಲ್ಲಿ

ಬಗೆಬಗೆಯವೇಷದಲಿ 

ಬ್ರಹ್ಮಾಂಡ ರೂಪದಲಿ ! 


ಶನಿವಾರ, ಜುಲೈ 1, 2023

An explanation to my previous post / poem

Ref : My recent poem on Haridasaru - here is an explanation. I wrote this

because my son heard the recitation and said that he could not make out

anything even after repeatedly listening to the poem.  


As I have said before, I was reading a book on Haridaasa culture and thought

that it would be nice if I could connect the well known dasaru to one of their

well known compositions and make a poem out of it. 


I began with Acharya Madhwa whom the book mentions first. It says the

Dwadasha Stortra written by Madhwacharya is probably the beginning

of ‘haridasa’ culture.(though the compositions were in sanskrit and not

Kannada - hence technically do not qualify as ‘daasa’ literature) The line

quoted in my poem is from the fourth chapter of ‘dwadasha stotra’ where

Madhwacharya declares the supremacy of Maha Vishnu. 

‘Bhujaverisi’ - means with raised hands.  ghoshisuvudu - is to declare 

‘Na hare paramo, na hare sadrusha’ - there is nothing /no one greater

than or like Sri Hari. 


The second is Sri Vadiraja teertha. He has written extensively in Sanskrit,

Kannada and TuLu ( I hope to find the tuLu compositions and get the meaning

from Aishwarya, my daughter in law). he was a master in Poetry, as well as

in writing scholarly articles. I did not quote any line from his compositions

but mentioned the fact that the lord appeared in the form of a horse in front

of Vadirajaru.  His ‘Dashavatara Stuti’ which I love, was inspired by that

experience. “Kudure Vadiraajarigaaytu Krishna Sadrusha” means the

Horse was Sri krishna to Vadirajaru. 


After this is Sripadarajaru and his composition “kangaLidyaatako kaveri

Rangana NoDada”. It is very beautifully sung by Sri Bhimasena Joshi,

Doyen of Hindustani Classical. One of my favourites. 


Sri Vyasateertharu has not written many poems, though he has written

extensively on Madhwa Philosophy. The line quoted is from one of his few

compositions and is new to me. I got it from the book I am reading.

But He is the first Yati or Swamiji who greatly encouraged Haridasa culture

and both Purandara dasaru and Kanakadasaru are his disciples. 

‘dingarugaLu’ means those who were strongly devoted to a deity/ god. 

‘Deekshe’ is - initiating someone into the group/ culture


Then comes Purandara dasaru who is said to have composed Thousands

(many are not available now) of devaranamas and his “kaliyugadali

harinaamava nenedare kulakoTigaLu uddharisuvavo” is one of the famous

compositions. (pari pari - the word used in my poem, means - in many

many ways, ‘PaDi’ means HaaDi, -  ‘by singing’. ‘Puneeta’ is spiritually

pure, sinless.


Next is kanakadasaru and the first line in his “keshava nama” is “eesha

ninna charaNa bhajane aasheyinda maaduvenu” - I am sure my family

members recollect the song and are fed up of hearing it being recited

by me again and again. 


“Indu engage govinda, ninnaya paada aravindava toro”  (make your lotus

feet visible to me today, Govinda) is supposed to be the only devaranama

written by  Sri Raghavendra swamy. But he has written meanings, notes

and comments on almost all of Sri madhwa’s works. He is known to be a

very great scholar and an expert in playing the Veena. The Line “Kandarpana

Tandeya aradhisidaru rayaru” means - (kandarpa is manmatha. his tande,

father is Vishnu. Aradhisu is worship with great love and devotion)  Rayaru

worshipped Sri Hari with the song”. 


Jagannatha dasaru is another haridaasaru having a similar story like

Purandara dasaru. PD was a jeweller turned haridasa, jagannatha dasaru

was a very learned but arrogant scholar turned haridasa. ‘Harikathamrutasara’

was his magnum opus and I hope to read it in full one day.  It is a collection

of thousands of beautifully written verses, my mother’s favourite, but I will

need a dictionary for almost every single line. 


The last stanza says “ I would like to sing and dance like these great people

but I don’t know the way.(Dishe is direction or path) I have a body ( kaaya)

which can worship you but again have no clue (upaaya) how exactly to do it.

(Here I don't mean the worship we see as ‘Pooje’ in temples and what we

usually do at home - I mean the worship in real sense - with the mind

unwaveringly concentrating on the supreme being or paramaatma,

who has no body that is perceivable by us and whose qualities makeup

his body - “Vigraho yasya sarve guNa evahi” as Sri Madhwacharya

describes. (His body is his unfathomable qualities.) 


His worship as described by Sri Raghavendraru is offering every deed done

by one, both good and bad in the course of the day, to him.  This matter

is a bit complicated to comprehend and I will try to make a better

explanation once I am clear in my mind. But What we presently do as

‘Pooje’ or worship, is what has been put in place by our elders and is

being followed over generations. It is not wrong but one is expected to

rise above that and that’s what I mean when I say I don’t know how

to worship you. 


The last two lines - ‘Bantaru’ are servants,  ‘Bantarinda kalita enTakshara’ -

means some eight or ten letters learnt from your servants.   Who are his

servants? - Every one starting from Brahma and going lower in the hierarchy.  

Brahma is considered the greatest teacher, Guru. Everyone lower in the

order from PraNadevaru to the teachers who taught me in first standard

are Vishnu’s ‘banTaru’ and ‘gurugaLu’ in their own right.  


‘EnTaksharagaLa ganTu’ - packet of eight letters. It does not exactly mean

‘eight letters’ but only indicates a very limited knowledge. ‘Balasi’ - using

that limited knowledge.   ‘tanTe’ - Mischief.   ‘SrikanthaSuta’ - son Of

Srikantha   ‘tunTu’ is mischief again.  So the last lines means “bear with

this son of Srikantha who is playing mischief using the limited knowledge

obtained from his teachers”. 


I hope this helps in getting a proper understanding of what is written.

Those who still have doubts and extra patience, may ask me for more !

Thanks for the patient reading. 



ಬುಧವಾರ, ಜೂನ್ 28, 2023

ಹರಿದಾಸರಿಗೆ ನಮನ


ಡಾ ಜಿ ವರದರಾಜರಾವ್ ಅವರ ‘ಹರಿದಾಸ ಸಾಹಿತ್ಯಸಾರ’ ಪುಸ್ತಕವನ್ನು  ಓದುತ್ತಿರುವಾಗ ಅದರಲ್ಲಿ ಉಲ್ಲೇಖಿಸಿರುವ

ಪೂಜ್ಯರುಗಳು ಬರೆದಿರುವ ಅನೇಕ ಪದ್ಯಗಳ ಪರಿಚಯವಾಯಿತು. ನಾನು ಸಾಹಿತ್ಯ ಪ್ರಕಾರಗಳನ್ನು ಕ್ರಮವಾಗಿ

ಅಭ್ಯಾಸಮಾಡಿ ತಿಳಿದವನಲ್ಲ. ಆದರೆ ಪದ್ಯ, ಕಾವ್ಯ, ಕವನ ಏನೇ ಇರಲಿ ಅದರಲ್ಲಿ ಪ್ರಾಸ ಇರಬೇಕೆಂದು ನನ್ನ

ಅಭಿಪ್ರಾಯ. ಪ್ರಾಸವಿಲ್ಲದ ದಾಸರಪದಗಳು ಬಹಳ ಅಪರೂಪ. ಹಾಗಾಗಿ ಪ್ರಾಸ, ಭಾವ ಪೂರ್ವಕವಾದ

ದಾಸರಪದಗಳು ನನಗೆ ಬಹಳ ಪ್ರಿಯವಾದ ಸಾಹಿತ್ಯಪ್ರಕಾರ.  ಮೇಲ್ಕಾಣಿಸಿರುವ ಪುಸ್ತಕದಲ್ಲಿ ಮಧ್ವಾಚಾಚಾರ್ಯ

ರಿಂದ ಮೊದಲಾಗಿ, ಉಲ್ಲೇಖಿಸಲ್ಪಟ್ಟಿರುವ ಯತಿಗಳು, ದಾಸರು ಅನೇಕರು. ಅವರೆಲ್ಲರನ್ನೂ ಹೆಸರಿಸಿ ಅವರ

ಕೃತಿಗಳ ಒಂದು ಸಾಲು ಸೇರಿಸಿ, ಒಂದು ಪದ್ಯ ಬರೆಯುವ ಪ್ರಯತ್ನ ಮಾಡಬಹುದೆನಿಸಿತು. ಅವರವರ

ಹೆಸರಿನೊಂದಿಗೆ ಸಾಮಾನ್ಯವಾಗಿ ಪ್ರಚಲಿತವಾಗಿರುವ ಗೀತೆಗಳ ಸಾಲುಗಳನ್ನು ಉದ್ಧರಿಸಿ ಒಂದು ಪದ್ಯ ರಚಿಸಿ

ಇಂದು ಆಷಾಢ ಶುದ್ಧ ಏಕಾದಶಿಯಂದು ‘ಕೃಷ್ಣಾರ್ಪಣ’ಮಾಡಿದ್ದೇನೆ.  



ಭುಜವೇರಿಸಿ ಘೋಷಿಸಿದರು ಉಡುಪಿಯಲಿ ಮಧ್ವರು,

‘ನ ಹರೇ ಪರಮೋ ನ ಹರೇ ಸದೃಶ’

‘ವಾದಿರಾಜಗೆ ಮುದದಿ ಜ್ಞಾನ ಭಕುತಿ ಕೊಡುವ’ ಕುದುರೆ 

ವಾದಿರಾಜ ತೀರ್ಥರಿಗಾಯ್ತು ಕೃಷ್ಣ ಸದೃಶ  


‘ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ’

ಕಂಗಳಿದ್ಯಾತಕೆಂದರು ಚಂದದಲಿ ಶ್ರೀಪಾದರಾಜರು 

‘ರಂಗಯ್ಯ ಬಂದರೆ ಅಂತರಂಗದಿ ಗುಡಿಕಟ್ಟಿ ಕುಣಿವೆ’ ನೆಂದರು   

ಡಿಂಗರಿಗರುಗಳಿಗೆ ದೀಕ್ಷೆಯಿತ್ತ ವ್ಯಾಸತೀರ್ಥರು  


‘ಕಲಿಯುಗದಲಿ ಹರಿನಾಮವ’ ಪರಿಪರಿಯಿಂದಲಿ 

ಪಾಡುತ್ತ  ಪುನೀತರಾದರು ಪೂಜ್ಯ ಪುರಂದರನ ದಾಸರು 

‘ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆ’ನೆಂದು

ಕೇಶವನ ಭಜಿಸಿದರು ಪಾವನರು ಕನಕದಾಸರು    

 

‘ಕಂದನಂತೆಂದೆನ್ನ ಕುಂದುಗಳನೆಣಿಸದೆಯೆ’ ಕಾಯಬೇಕೆಂದು  

ಕಂದರ್ಪನ ತಂದೆಯ ಆರಾಧಿಸಿದರು ಮಂಚಾಲೆ ರಾಯರು 

‘ಹರಿಕಥಾಮೃತಸಾರ’ವೆಂಬ ಅಮೃತಾಭಿಷೇಕವಮಾಡಿ 

ಜಗದೊಡೆಯನ ಅಡಿಗೆರಗಿದರು ಜಗನ್ನಾಥದಾಸರು


ನಿನ್ನ ಬಣ್ಣಿಸಿ ಕುಣಿವ ಆಶೆಯುಂಟೆನಗೆ ಹರಿ, ದಿಶೆ ತಿಳಿಯದು 

ನಿನ್ನ ಪೂಜಿಸಲು ಕಾಯವುಂಟೆನಗೆ, ಉಪಾಯ ತಿಳಿಯದು  

ನಿನ್ನ ಬಂಟರಿಂದ ಪಡೆದ ಎಂಟಕ್ಷರಗಳ ಗಂಟ ಬಳಸಿ  

ತಂಟೆ ಮಾಡುವ ಶ್ರೀಕಂಠಸುತನ, ತುಂಟು ಸಹಿಸೋ ವೆಂಕಟೇಶ !


ಶನಿವಾರ, ಜೂನ್ 17, 2023

ಬನಗಿರಿಯ ಬನದಲ್ಲಿ

There are about eight BBMP parks within a radius of one kilometer from my

house in Padmanabha Nagar, Bengaluru. I keep visiting all of them now and

then but my favourite park is the “Banagiri BBMP park” located behind what

is popularly known as the ‘Devegowda petrol bunk’ and from whichever direction

I start my walk in the morning, I usually end up at Banagiri.


The parks vary a bit in size and shape but all of them have a similar layout,

and similar facilities. But this Banagiri park is at a height and provides an

unobstructed view for many kilometers on one side, and probably due to the

same reason it is quite breezy. The name ‘banagiri’ means a wooded hillock and

the park is on one of the slopes. ‘Development’ has taken its toll and the entire

hillock is now a ‘Concrete wood,’ but for two patches of green in the form of

two parks. 


The park is on two levels and the lower part is quite a steep slope. Apart from

the usual greenery, this slope contains a clear rocky part which is surrounded

by trees and is an ideal place to exercise, meditate, sing and chant or just sit

quietly if you so desire. At the time when I go there, usually around half past

five in the morning, there is hardly anyone else in the park and certainly none

on the lower level. Depending on my whim for the morning I may usually be

found indulging in one of the above activities there. The place is also inhabited,

apart from a few stray dogs, by a number of birds, bees and squirrels which are

early risers and they can be seen engaged in their day to day activities. I love

the early morning atmosphere there. 


I was sitting there this morning and I felt that the surroundings were

exceptionally appealing today. There was a strong cool breeze, the early

morning sky was blue with scattered white clouds, birds were chirping on

the trees nearby, squirrels were scurrying around in search of I don’t know

what, and I could see the bee buzzing around the flowers closeby. I enjoyed

my time thoroughly. I have said that in a somewhat poetic format,

in kannada, below. 


ಬೆಳಗಾಗುತ್ತಲೆ ಬನಗಿರಿಯ ಉದ್ಯಾನದೆಡೆ ಗಮನ    

ಹಚ್ಚ ಹಸಿರಿನ ವನ, ಮೇಲೆ ನೀಲಿಯ ಗಗನ 


ಹಸಿರುಗಿಡ ಸೊಗಯಿಸುತ್ತದೆ ಬಿಳಿಯ ಹೂ ಮೈತುಂಬಿ  

ಮಧುವರಸುತ ಝೇಂಕರಿಸುತಿದೆ ಕರಿ ಬಣ್ಣದ ದುಂಬಿ 


ಮೇಲೆ ನೀಲಾಕಾಶದಲಿ ಬಿಳಿಹತ್ತಿಯ ಮೋಡ 

ಬಿಳಿ ಮೋಡದ ಅಡಿಹಾರುವ ಕರಿ ಹಕ್ಕಿಯ ನೋಡ !  


ಆಹಾರವ ಅರಸುತ್ತಲಿ ಸುಳಿಯುತ್ತದೆ ಅಳಿಲು 

ಎಡೆಬಿಡದೆಯೆ ಹತ್ತಿಳಿಯುತ ಆಲದಾ ಬಿಳಲು 


ಕಂಗೊಳಿಸುತ್ತದೆ ಹೊಂಬಿಸಿಲಲಿ ಬನಗಿರಿಯ ಕಿರಿ ಕಾನು 

ತಂಗಾಳಿಯಲಿ ಕುಳಿತಿಲ್ಲಿ ಎನ್ನನೇ ಮರೆವೆ ನಾನು !



ಮಂಗಳವಾರ, ಮೇ 2, 2023

ಮೂರುರಸ್ತೆ ಮತ್ತು ಮೂಷಕವಾಹನ



ನನ್ನ ಜೀವನದ ಮೊದಲ ಮೂವತ್ತು ವರುಷ ನಾವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಮನೆ ಇದ್ದದ್ದು

ಮೂರುರಸ್ತೆಗಳು  ಕೂಡುವೆಡೆಯಲ್ಲಿ. ನಾನು ಗೋವಾದಲ್ಲಿ ನೌಕರಿಗೆ ಸೇರಿ ನಮ್ಮ ಬೆಂಗಳೂರಿನ

ಮನೆಯನ್ನು ಖಾಲಿಮಾಡಿದ ನಂತರ ಆ ಮನೆಗೆ ಬಾಡಿಗೆಗೆ ಬಂದಾತ ಮೊದಲು ಮನೆಯ ಮುಂದೆ

ಒಂದು ಗಣಪತಿಯ ಚಿತ್ರವನ್ನು ಹಚ್ಚಿ ನಂತರ ತನ್ನ ಸಂಸಾರ ತಂದ. ಮೂರು ರಸ್ತೆ ಸೇರುವ ಜಾಗ

ಅಶುಭವಂತೆ. ಹಾಗಾಗಿ ನಾವು ಅಂಥ ಸ್ಥಳದಲ್ಲಿ ವಾಸಿಸಬೇಕಾಗಿ ಬಂದಾಗ ಮೊದಲು ಗಣಪತಿಯನ್ನು

ಅಲ್ಲಿ ಸ್ಥಾಪಿಸಿ ಅವನನ್ನು ಆ ಜಾಗದ ವಾರಸುದಾರನನ್ನಾಗಿ ನಿಯಮಿಸಿ ನಂತರ ಅವನ ರಕ್ಷಣೆಯಲ್ಲಿ

ನಾವು ಅಲ್ಲಿ ವಾಸಮಾಡುವುದು.  ನಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟಾಗಲೇ ನನಗೆ ತಿಳಿದದ್ದು ನಮ್ಮ

ಗಣಪನ ಮತ್ತು ಮೂರು ರಸ್ತೆಯ ಸಂಭಂದ.  ಈಗ ನಾನು ಮೂರು ರಸ್ತೆ ಸೇರುವೆಡೆಯೆಲ್ಲ

ಕುತೂಹಲದಿಂದ ಗಣಪತಿಯನ್ನು ಹುಡುಕುತ್ತೇನೆ. ನಮ್ಮ ವಿಘ್ನನಾಶಕ ಇಂದಿನವರೆಗೆ ನನ್ನನ್ನು ನಿರಾಸೆಗೊಳಿಸಿಲ್ಲ.  


ಕೆಲವರು ಮನೆಯ ಮುಂದಿನ ಕಂಪೌಂಡಿನಲ್ಲಿ ಒಂದು ಗೂಡುಮಾಡಿ ಅವನನ್ನು ಇರಿಸಿರುತ್ತಾರೆ.

ಮತ್ತೆ ಕೆಲವರು ತಮ್ಮದಲ್ಲದ ಫುಟ್ ಪಾತ್ ಮೇಲೆ ಚಂದದ ಮಂದಿರಕಟ್ಟಿ ಗಣಪತಿಯನ್ನಿಟ್ಟು

ನಿತ್ಯ ಪೂಜೆ ನಡೆಸುತ್ತಾರೆ. ಕೆಲವರು ಒಂದು ಕಲ್ಲಿನ ಫಲಕದಲ್ಲಿ ಏಕದಂತನನ್ನು ಕೆತ್ತಿ ಮನೆಯ

ಮುಂದಿನ  ಗೋಡೆಗೆ ಲಗತ್ತಿಸಿರುತ್ತಾರೆ. ಏನಿಲ್ಲವಾದರೆ ಮನೆಯ ಮುಂದೆ ಗೋಡೆಗೊಂದು ಮೊಳೆ

ಹೊಡೆದು ವರುಷಕಳೆದ ಒಂದು ಹಳೆ ಕೆಲೆಂಡರಿನ ಗಣಪನನ್ನು ಅಲ್ಲಿ ನೇತು ಹಾಕಿರುತ್ತಾರೆ.

ಒಟ್ಟಿನಲ್ಲಿ ಮನೆಯಮುಂದೆ ಗಣಪತಿಗೊಂದು ಸ್ಥಾನ ಇರುತ್ತದೆ. 


ನಾವು ಅನೇಕ ವರುಷಗಳ ಹಿಂದೆಯೇ ಮಾರಿದ್ದ ನಮ್ಮ ಮನೆಯ ಬಳಿ ಇನ್ನೂ ವಾಸವಿದ್ದ ಸ್ನೇಹಿತರೊಬ್ಬರನ್ನು

ನೋಡಲೆಂದು ಮೊನ್ನೆ ಹೋಗಿದ್ದೆ. ನಮ್ಮ ಮನೆ ಇನ್ನೂ ಅಲ್ಲಿಯೇ ಇತ್ತು. ಆದರೆ ಕೊಂಚ ಬದಲಾಗಿತ್ತು.

ನನಗೆ ಎದ್ದು ಕಂಡದ್ದು ನಮ್ಮ ಬಾಡಿಗೆಯಾತ ಮನೆಯ ಮುಂದೆ ಲಗತ್ತಿಸಿದ್ದ ಗಣಪ ಮಾಯವಾಗಿದ್ದದ್ದು.

ಕುತೂಹಲದಿಂದ ಅದರ ಬಗ್ಗೆ ಸ್ನೇಹಿತನನ್ನು ವಿಚಾರಿಸಿದೆ. ನಮ್ಮಿಂದ ಮನೆ ಕೊಂಡಿದ್ದವರು ಅದನ್ನು

ಮತ್ಯಾರಿಗೋ  ಮಾರಿಬಿಟ್ಟರಂತೆ. ಈಗ ಆ ಮನೆಯಲ್ಲಿ ಮುಸಲ್ಮಾನರೊಬ್ಬರು ವಾಸವಿದ್ದಾರಂತೆ.

ಹಾಗಾಗಿ ನಮ್ಮ ಗಣಪನಿಗೆ ಎತ್ತಂಗಡಿಯಾಗಿತ್ತು. 


ಇಂದು ಮುಂಜಾನೆ ನಾನು ನನ್ನ ನಿತ್ಯದ ವಾಯುಸಂಚಾರ ಮುಗಿಸಿ ವಾಪಸು ಬರುವಾಗ ನನಗಿಂತ

ಕೊಂಚ ಮುಂದೆ ನಡೆಯುತ್ತಿದ್ದಾತ ತಟಕ್ಕನೆ ರಸ್ತೆಯಲ್ಲಿಯೇ ನಿಂತು, ಅಲ್ಲೇ ಪಕ್ಕದ ಮನೆಯ ಕಾಂಪೌಂಡಿನ

ಮೇಲಿದ್ದ  ಗಣಪತಿಯ ಕಡೆಗೆ ತಿರುಗಿ, ಮೆಟ್ಟಿದ್ದ ಚಪ್ಪಲಿ ಕಳಚಿ, ಕೈಜೋಡಿಸಿ, ಕಣ್ಣು ಮುಚ್ಚಿದ. ಮರುಕ್ಷಣ

ಹಿಂದಿನಿಂದ ಬಂದ ರಿಕ್ಷಾದ ಹಾರನ್ನಿಗೆ ಬೆದರಿ, ಮುಂದಕ್ಕೆ ಎಗರಿ, ಗಡಿಬಿಡಿಯಲ್ಲಿ ತನ್ನ ಚಪ್ಪಯಲ್ಲಿ

ಕಾಲು ತುರುಕಿ ಮುಂದೆ ನಡೆದ.  


ಆ ದೃಶ್ಯದಿಂದ ಪ್ರೇರಿತವಾಗಿ, ಮನದಲ್ಲಿ ಬಹುದಿನಗಳಿಂದ ಸೇರಿದ್ದ ಭಾವನೆಗಳಿಂದ ಪೂರಿತವಾಗಿ,

ಹೊರಬಿದ್ದ ಪದ್ಯ ಈ ಕೆಳಗಿನದು. 


 

ಮೂರು ರಸ್ತೆ 

ಕೂಡುವೆಡೆಯೆಲ್ಲಾ  

ತಾನೂ ಕೂಡುತ್ತಾನೆ 

ನಮ್ಮ ಗಣಪ 


ಬಿಸಿಲಿಗೆ ಬೇಯುತ್ತಾ 

ಚಳಿಗೆ ನಡುಗುತ್ತಾ 

ಮಳೆಯಲ್ಲಿ ನೆನೆಯುತ್ತಾ 

ರಸ್ತೆ ಧೂಳು ಕುಡಿಯುತ್ತಾ 


ಕೆಲವರು   

ಇರಿಸುತ್ತಾರೆ ಇವನನ್ನು

ಚಂದದ ಮಂದಿರಕಟ್ಟಿ 

ಕೆಲವರು ಕೂರಿಸಿರುತ್ತಾರೆ  

ಹಾಗೆಯೇ ಬೇಕಾಬಿಟ್ಟಿ  


ಬಳಿಯಲ್ಲಿ ಸುಳಿವವರು 

ನಿಲ್ಲುತ್ತಾರೆ ಅರೆಕ್ಷಣ

ಚಪ್ಪಲಿ ಬಿಚ್ಚಿ 

ಕಣ್ಣು ಮುಚ್ಚಿ 

ಹಣೆಗೆ ಕೈ ಹಚ್ಚಿ 


ನೆಗೆದು ನಡೆಯುತ್ತಾರೆ 

ಮರುಕ್ಷಣ 

ಹಿಂದಿನಿಂದ ಬಂದ

ರಿಕ್ಷಾ ಸದ್ದಿಗೆ ಬೆಚ್ಚಿ !


ನಮ್ಮ ಮನೆಯಿತ್ತು 

ಮೂರುರಸ್ತೆ ಕೂಡುವೆಡೆ 

ಆದರೆ ಮನೆ ಮುಂದೆ 

ಗಣಪನಿರಲಿಲ್ಲ  


ಅದೇಕೆಂದು ಅಪ್ಪನ 

ಕೇಳೋಣವೆಂದರೆ 

ಈಗ ಅಪ್ಪನೇ ಇಲ್ಲ 


ಮುಂದೆಯೂ ಗಣಪ 

ಅಲ್ಲಿ ಕೂಡುವುದಿಲ್ಲ 

ಏಕೆಂದರೆ ಅಲ್ಲಿ   

ಒಳಗೆ ಕುಳಿತಿದ್ದಾನಲ್ಲ  


ಯಾ ಅಲ್ಲಾ !!